Slide
Slide
Slide
previous arrow
next arrow

ನಂದಿನಿ ಹಾಲಿನ ದರ ಏರಿಕೆ ಆದೇಶ ಸಂತೋಷ ನೀಡದಿದ್ದರೂ ಸಮಾಧಾನಕರ: ಸುರೇಶ್ಚಂದ್ರ ಹೆಗಡೆ

300x250 AD

ಶಿರಸಿ: ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ, ಧಾರವಾಡದ ವ್ಯಾಪ್ತಿಯಲ್ಲಿನ ಹೈನುಗಾರರ ಬಹುದಿನದ ಬೇಡಿಕೆಯಾಗಿದ್ದ ಹಾಲಿನ ದರ ಏರಿಸುವ ಪ್ರಕ್ರಿಯೆಗೆ ರಾಜ್ಯ ಸರಕಾರ ಬುಧವಾರ ಹಸಿರು ನಿಶಾನೆ ತೋರಿಸಿದೆ.


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ, ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರು ನಮ್ಮಿಂದ ಮಾನ್ಯ ಮುಖ್ಯಮಂತ್ರಿಗಳಲ್ಲಿ ಪ್ರತೀ ಲೀಟರ್ ಹಾಲಿಗೆ ರೂ.3/- ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿತ್ತು, ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೇತ್ರತ್ವದ ರಾಜ್ಯ ಸರ್ಕಾರ ಪ್ರತೀ ಲೀಟರ್ ಹಾಲಿಗೆ ರೂ.2/- ಹೆಚ್ಚಳ ಮಾಡುವಂತೆ ಅನುಮತಿ ನೀಡಿದ್ದು,ಅವರ ಆದೇಶದಂತೆ ನಮ್ಮ ಒಕ್ಕೂಟದಿಂದ ನಂದಿನಿ ಪ್ಯಾಕೆಟ್‌ ಮೇಲಿನ ಪ್ರತೀ ಲೀಟರ್ ಹಾಲಿಗೆ ರೂ. ರೂ.2/- ಹೆಚ್ಚಳ ಮಾಡಲಾಗಿದೆ. ಈ ನಿರ್ಧಾರ ನಮಗೆ ಸಂತೋಷ ನೀಡದಿದ್ದರೂ ಸಮಾಧಾನ ತಂದಿರುವಂತಾಗಿದ್ದು, ಇದೇ ರೀತಿಯಾಗಿ ಹಾಲು ಉತ್ಪಾದಕ ರೈತರ ಪ್ರತೀ ಲೀಟರ್ ಹಾಲಿಗೆ ಸರ್ಕಾರದಿಂದ ನೀಡಲಾಗುತ್ತಿರುವ ರೂ‌.5/- ಪ್ರೋತ್ಸಾಹಧನವನ್ನು ರೂ‌.6/- ಗೆ ಹೆಚ್ಚಳ ಮಾಡಬೇಕು ಇದರಿಂದ ಪ್ರತಿ ಲೀಟರ್ ಹಾಲಿಗೆ ರೂ.3/- ಹೆಚ್ಚಳ ಮಾಡಬೇಕೆಂಬ ನಮ್ಮ ಈ ಮೊದಲಿನ ಬೇಡಿಕೆಯನ್ನು ಸರ್ಕಾರ ಈಡೇರಿಸಿದಂತಾಗುತ್ತದೆ ಎಂದರು. ನಂದಿನಿ ಪ್ಯಾಕೆಟ್‌ ಮೇಲಿನ ಪ್ರತೀ ಲೀಟರ್ ಹಾಲಿಗೆ ರೂ.2/- ಹೆಚ್ಚಳದ ರೂ.2/- ನ್ನು ನಮ್ಮ ಹಾಲು ಒಕ್ಕೂಟವು ಹಾಲು ಉತ್ಪಾದಕ ರೈತರಿಗೆ ನೀಡಲು ಈಗಾಗಲೇ ತೀರ್ಮಾನಿಸಿದ್ದು, ಪ್ರಸ್ತುತವಾಗಿ ಹಾಲು ಉತ್ಪಾದಕ ರೈತ ಸಂಘಗಳಿಗೆ ಒದಗಿಸುವ 4.0% Fat ಮತ್ತು 8.5 SNF ಇರುವ ಪ್ರತೀ ಲೀಟರ್‌ ಆಕಳಿನ ಹಾಲಿಗೆ ರೂ.27.00/-, 6.0% Fat ಮತ್ತು 9.0 SNF ಇರುವ ಪ್ರತೀ ಲೀಟರ್‌ ಎಮ್ಮೆ ಹಾಲಿಗೆ ರೂ.41.00/- ನಂತೆ ಇದ್ದು, ಒಕ್ಕೂಟದ ರೂ.2/- ದರ ಹೆಚ್ಚಳದಿಂದ ರೈತರಿಗೆ 4.0% Fat ಮತ್ತು 8.5 SNF ಇರುವ ಪ್ರತೀ ಲೀಟರ್‌ ಆಕಳಿನ ಹಾಲಿಗೆ ರೂ.29.00/-, (ಪ್ರತಿ ಲೀಟರ್ ಗೆ 34 ರೂಪಾಯಿ ರಾಜ್ಯ ಸರಕಾರದ 5 ರೂಪಾಯಿ ಸಹಾಯಧನ ಸೇರಿ) ಹಾಗೂ 6.0% Fat ಮತ್ತು 9.0 SNF ಇರುವ ಪ್ರತೀ ಲೀಟರ್‌ ಎಮ್ಮೆ ಹಾಲಿಗೆ ರೂ.43.00/- (ಪ್ರತಿ ಲೀಟರ್ ಗೆ 48 ರೂಪಾಯಿ ರಾಜ್ಯ ಸರಕಾರದ 5 ರೂಪಾಯಿ ಸಹಾಯಧನ ಸೇರಿ) ರಂತೆ ದರ ಸಿಗಲಿದ್ದು, ಪರಿಷ್ಕೃತ ದರವು 24-11-2022 ರ ಬೆಳಗಿನ ಸರತಿಯಿಂದಲೇ ಒಕ್ಕೂಟದ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಜಾರಿಗೆ ಬರುವಂತೆ ಒಕ್ಕೂಟದಿಂದ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರಕಾರ ಹಾಲು ಉತ್ಪಾದಕ ರೈತರ ಪ್ರತೀ ಲೀಟರ್ ಹಾಲಿಗೆ ಸರ್ಕಾರದಿಂದ ನೀಡಲಾಗುತ್ತಿರುವ ರೂ‌.5/- ಪ್ರೋತ್ಸಾಹಧನವನ್ನು ರೂ‌.6/- ಗೆ ಶೀಘ್ರವಾಗಿ ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರಕ್ಕೆ ಒಕ್ಕೂಟದ ಮಾನ್ಯ ಅಧ್ಯಕ್ಷರಾದಂತಹ ಶಂಕರ ವೀರಪ್ಪ ಮುಗದ ಅವರ ಮೂಲಕ ಜಿಲ್ಲೆಯ ಸಮಸ್ತ ಹೈನುಗಾರರ ಪರವಾಗಿ ಈ ಮೂಲಕ ಮನವಿ ಸಲ್ಲಿಸುತ್ತಿರುವುದಾಗಿ ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ, ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top